ಕ್ರಾಂತಿ ಹರಿಕಾರ ಸುಭಾಷ ಚಂದ್ರ

ಕ್ರಾಂತಿ ಮಂತ್ರದ ಹರಿಕಾರ
ನಿಷ್ಕಪಟ ಮನದ ನೇತಾರ
ಉಕ್ಕಿಸಿದ್ದ ಯುವಮನದಿ
ಸ್ಪೂರ್ತಿ ಸಹಕಾರ

ಜೈ ಹಿಂದ ಜೈಕಾರ
ಜನಸಾಗರದಿ ಝೇಂಕಾರ
ಜನಮನದಿ ಅಳಿಯದೇ
ಜನಜನಿತ ನಿರಂತರ

ಸ್ವರಾಜ್ ಪಕ್ಷದ ಉದಯ
ನಿನ್ನ ತತ್ವದ ವಲಯ
ಬೆಳೆಸಿತ್ತು ಜನರಲ್ಲಿ
ಸ್ವಾತಂತ್ರ್‍ಯ ವೆಂಬ ಮತ್ತು ಬಲೆಯ
ಭುಗಿಲೆದ್ದ ಬೆಂಕಿಯದು
ಅಜಾದ ಹಿಂದ ಫೌಜ್
ಹೊರನಾಡ ನೆಲೆಯಲ್ಲಿ
ನಿನ್ನ ಜಯದ ಬೇಟೆಯಲಿ

ಕಂಚಿನ ಕಂಠಕ್ಕೆ ಮರುಳಾಗಿ
ಯುವ ಹೃದಯ ಮನದಿಂದ
ಮೊಳಗಿತ್ತು ಕರೆದು ‘ನೇತಾಜಿ’
ಅನ್ವರ್ಥಕದ ಬಿರುದು

ಉಗ್ರಾಗಾಮಿಯ ಗತ್ತು
ಪರಮವೈರಿಗೆ ಕುತ್ತು
ನಡೆದಿತ್ತು ತೆರೆಮರೆಯ
ಮರಣ ಮಸಲತ್ತು
ವಾಯುಯಾನದ ವೇಳೆ
ಪ್ರಾಣ ವಾಯುವ ಕೇಳೆ
ಮರಣ ದೈತ್ಯ
ಆದರೂ ಅದು ನಿಗೂಢ ಸತ್ಯ

*****

Previous post ಪ್ರಾರ್ಥನೆ
Next post ನೂರು ಮಂದಿ ಮನುಷ್ಯರು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys